ಪೋಸ್ಟ್‌ಗಳು

ನವೆಂಬರ್, 2008 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಛಾಯಾಗ್ರಾಹಕ ಅಲ್ಲ, ಫೋಟೊ ಎಂಜಿನಿಯರ್

ಇಮೇಜ್
ತನ್ನಲ್ಲಿರುವ ಅಪರೂಪದ ಕ್ಯಾಮರಾಗಳು ಮತ್ತು ಅವುಗಳಿಂದ ಕ್ಲಿಕ್ಕಿಸಿದ ಫೋಟೆಗಳಿಂದ ಬೆರಗುಗೊಳಿಸುವ ವ್ಯಕ್ತಿ ಗುಲಾಂ ಮುಂತಾಕ್. ಐತಿಹಾಸಿಕವಾಗಿ ಮಹತ್ವದ ನಗರವಾದರೂ ಸಮಕಾಲೀನವಾಗಿ `ಹಿಂದುಳಿದ' ಹಣೆಪಟ್ಟಿ ಕಟ್ಟಿಕೊಂಡ ಬೀದರ್‌ನಂತಹ ಪುಟ್ಟ ಪಟ್ಟಣದಲ್ಲಿ ಇರುವ ಅದ್ಭುತ ವ್ಯಕ್ತಿ. ಕ್ಯಾಮರಾ ಹುಚ್ಚಿನ ಈ ಛಾಯಾಗ್ರಾಹಕ ಜಗತ್ತಿನಲ್ಲಿಯೇ ಅತಿ ದೊಡ್ಡ ನೆಗೆಟಿವ್ ಒಡೆಯ. ಅವರ ಬಳಿ ಇರುವ ಎಂಟು ಅಡಿ ಅಗಲದ ನೆಗೆಟಿವ್ನಷ್ಟು ದೊಡ್ಡ ನೆಗೆಟಿವ್ ಜಗತ್ತಿನಾದ್ಯಂತ ಬೇರೆಲ್ಲಿಯೂ ಇಲ್ಲ. ನೆಹರೂ ಕಾಲದ ದೆಹಲಿಯ ಛಾಯಾಗ್ರಾಹಕ ಎ.ಆರ್.ದತ್ತಾ ಸಂದರ್ಶನವೊಂದರಲ್ಲಿ `ನನ್ನ ಹತ್ತಿರ ಇರುವ ಆರು ಅಡಿ ಅಗಲದ ನೆಗೆಟಿವ್ ಅತ್ಯಂತ ದೊಡ್ಡದು' ಎಂದು ತಿಳಿಸಿದ್ದರು. ಆದರೆ, ಮುಂತಾಕ್ ಬಳಿ ಅದಕ್ಕಿಂತ ಎರಡು ಅಡಿ ಹೆಚ್ಚು ಅಗಲವಾಗಿರುವ ನೆಗೆಟಿವ್ ಇದೆ. ಸಾಲಾಗಿ 400ಕ್ಕೂ ಹೆಚ್ಚು ಜನ ಕುಳಿತಾಗ ಕ್ಲಿಕ್ಕಿಸಿದ ಗ್ರೂಪ್ ಫೋಟೊ (ಸಮೂಹ ಚಿತ್ರ)ದಲ್ಲಿನ ಪ್ರತಿಯೊಬ್ಬರನ್ನೂ ನಿಚ್ಚಳವಾಗಿ ಕಾಣಿಸುವಂತೆ ಒಂದೇ ಕಾಲಕ್ಕೆ ಸೆರೆ ಹಿಡಿಯಬಲ್ಲರು ಮುಂತಾಕ್. ಆ ಚಿತ್ರದ ನೆಗೆಟಿವ್ನಿಂದ ಪ್ರತಿಯೊಬ್ಬ ವ್ಯಕ್ತಿಯ ಪ್ರತ್ಯೇಕ ಛಾಯಾಚಿತ್ರ ಪ್ರಕಟಿಸಬಹುದು. ಸಮೂಹದಲ್ಲಿರುವ ಎಲ್ಲರ ಮುಖದ ಮೇಲಿನ ನೆರಿಗೆಗಳು, ಹಣೆಯ ಮೇಲಿನ ಬೆವರ ಹನಿಯನ್ನೂ ಈ ಕ್ಯಾಮರಾ ದಾಖಲಿಸುತ್ತದೆ.ಕೇವಲ ಇವಷ್ಟೇ ಅಲ್ಲ. ಅಂತಹ ಹತ್ತು ಹಲವು ವೈಶಿಷ್ಟ್ಯಗಳ ಆಗರ ಈ ಮುಂತಾಕ್. ಪರಸ್ಪರ ಮುಖಾಮುಖಿಯಾಗಿರುವ ಮುಂಬೈನ ಗೇಟ್

ಜೌಗು ನೆಲದಲ್ಲಿ ಬಂಪರ್‌ ಬೆಳೆ

ಇಮೇಜ್
ಕೇವಲ 15ವರ್ಷಗಳ ಹಿಂದೆ ಬೆಳೆ ಬೆಳೆಯಲು ಉಪಯುಕ್ತವಲ್ಲದ ಜೌಗು ಪ್ರದೇಶವಾಗಿದ್ದ ನೆಲ ಇಂದು ರಾಜ್ಯದಲ್ಲಿಯೇ ಅತಿ ಹೆಚ್ಚು ಕಡಲೆ ಇಳುವರಿ ತರುತ್ತಿದೆ. ಕಾರಂಜಾ ನದಿಗುಂಟ ಇರುವ ಕಾರಣಕ್ಕಾಗಿಯೇ ಭಾಲ್ಕಿ ತಾಲ್ಲೂಕಿನ ಕುರುಬಖೇಳಗಿಯ ಶೇಷಪ್ಪ ಬಿರಾದಾರ ಅವರಿಗೆ ಸೇರಿದ ಬೀಳು ಬಿಡಲಾಗಿತ್ತು. ಆಗಾಗ ಬರುವ ನೆರೆ ಮತ್ತು ಅತಿ ನೀರಿನ ಕಾರಣದಿಂದಾಗಿ ಬಿತ್ತಿ ಬೆಳೆಯಲು ಸಾಧ್ಯವಿಲ್ಲದ ಹೊಲವಾಗಿತ್ತು. ದನಕರುಗಳಿಗೆ ಮೇವಾದರೂ ಆಗಲಿ ಎನ್ನುವ ಕಾರಣಕ್ಕಾಗಿ ಆ ಹೊಲವನ್ನು ಬೀಳು ಬಿಡಲಾಗಿತ್ತು. ಹರಿಯುತ್ತಿದ್ದ ಕಾರಂಜಾ ನದಿಗೆ ಅಡ್ಡಗಟ್ಟಿ ಜಲಾಶಯ ನಿರ್ಮಿಸಿದ ಮೇಲೆ ನದಿಯ ಹರಿವು ನಿಂತೇ ಹೋಯಿತು. ನದಿ ನೀರು ಬರುವುದು ನಿಂತ ಮೇಲೆ ಹೊಲಕ್ಕೆ ಜೀವ ಬಂತು. ಹಿಂದೆ ನದಿಯ ನೀರಿನಗುಂಟ ಬಂದಿದ್ದ ಮೆಕ್ಕಲು ಮಣ್ಣು ಹೊಲವನ್ನು ಫಲವತ್ತಾಗಿಸಿತ್ತು. ಅದೇ ಹೊಲದಲ್ಲಿ ಕೃಷಿ ಆರಂಭಿಸಲು ನಿರ್ಧರಿಸಿದರು ಶೇಷಪ್ಪ ಬಿರಾದಾರ. ಕೆಲವು ವರ್ಷಗಳ ಸತತ ಪ್ರಯತ್ನದ ನಂತರ ಏನನ್ನೂ ಬೆಳೆಯಲು ಸಾಧ್ಯವಿಲ್ಲದ ಜಮೀನಿನಲ್ಲಿ ಸುತ್ತಲ ಹತ್ತು ಹಳ್ಳಿಯ ಯಾರೊಬ್ಬರ ಹೊಲದಲ್ಲಿಯೂ ಇರದಷ್ಟು ಪ್ರಮಾಣದ ಇಳುವರಿ ಬರಲಾರಂಭಿಸಿತು. ಬಿತ್ತಿದ ವಸ್ತು ಏನೇ ಆದರೂ ಬಂಪರ್ ಇಳುವರಿ ತರುವ ಅದೃಷ್ಟಶಾಲಿ ಹೊಲವಾಯಿತು. ಮಳೆನೀರನ್ನೇ ಆಶ್ರಯಿಸಿ ಕೃಷಿ ಮಾಡುವುದನ್ನು ಮುಂದುವರೆಸಿದ ಶೇಷಪ್ಪ ಅವರು ಕೆಲ ವರ್ಷಗಳ ನಂತರ ಕಡಲೆ ಆ ನೆಲಕ್ಕೆ ಸೂಕ್ತ ಎಂದು ನಿರ್ಧರಿಸಿದರು. ಅದಾದ ಮೇಲೆ ಕಡಲೆಯ ಬೆಳೆಯು ಅವರಿಗೆ ಕೈತುಂಬ ಹಣ

ದಶಮಾನೋತ್ಸವ ಪೂರ್ಣಗೊಳಿಸಿದ `ನಾದವೇದಿಕೆ'

ಇಮೇಜ್
ಹವ್ಯಾಸಿ ಸಂಗೀತ ಆಸಕ್ತರು ಹುಟ್ಟು ಹಾಕಿದ ಪುಟ್ಟ ನಾದದ ತೊರೆಯೊಂದು ಅವಿರತವಾಗಿ ಕಳೆದ ಹತ್ತು ವರ್ಷಗಳಿಂದ ಹರಿದು ಬರುತ್ತಿದೆ. ಶಾಸ್ತ್ರೀಯ ಸಂಗೀತಕ್ಕೇ ಪ್ರಾಧಾನ್ಯ ನೀಡುವ ಬೀದರ್ ಜಿಲ್ಲೆಯ ಹುಮನಾಬಾದ್ನ `ನಾದ ವೇದಿಕೆ' ಸಂಗೀತದ ಆಸಕ್ತಿ ಉಳಿಸಿ ಬೆಳೆಸುವಲ್ಲಿ ಮಾಡಿದ ಸಾಧನೆ ಅನನ್ಯ ಮತ್ತು ಅಪೂರ್ವ. ಸಂಗೀತದಲ್ಲಿ ಆಸಕ್ತಿ ಇರುವ ಹತ್ತಾರು ಜನ ತಮ್ಮ `ಪಾಕೆಟ್ ಮನಿ' ಆರಂಭಿಸಿದ ಈ ಸಂಸ್ಥೆ ಮಾಡಿದ ಕೆಲಸ ಗಮನಾರ್ಹ. `ನಾದ ವೇದಿಕೆ'ಯಲ್ಲಿ ಇರುವ ಬೆರಳೆಣಿಕೆಯಷ್ಟು ಜನರಲ್ಲಿ ಬಹುತೇಕ ಜನ ಸರ್ಕಾರಿ ಅಥವಾ ಖಾಸಗಿ ಸಂಸ್ಥೆಗಳಲ್ಲಿ ಕೆಲಸದಲ್ಲಿ ಇರುವವರು. ಅದರಲ್ಲೂ ಉಪನ್ಯಾಸಕ ಅಥವಾ ಶಿಕ್ಷಕ ಹ್ದುದೆಯಲ್ಲಿ ಇರುವವರು. ನಿತ್ಯದ ನೂರು ಜಂಜಡಗಳ ನಡುವೆಯೇ ಅಲ್ಪ ಆದಾಯದಲ್ಲಿಯೇ ಒಂದಷ್ಟು ಹಣ ಉಳಿಸಿಟ್ಟು ವೇದಿಕೆಯ ಕಾರ್ಯಕ್ರಮಗಳಿಗೆ ನೀಡುತ್ತಾರೆ. ಅದೇ ವೇದಿಕೆಯ ಚಟುವಟಿಕೆಗಳಿಗೆ ಪ್ರಮುಖ ಆಧಾರ. ಸರ್ಕಾರದಿಂದ ಅಥವಾ ಉದ್ಯಮಿಗಳಿಂದ ಆರ್ಥಿಕ ನೆರವು ಪಡೆಯದೇ ಸಂಗೀತ ಕಚೇರಿಗಳನ್ನು ನಡೆಸುವ ಉದ್ದೇಶದಿಂದ ಆರಂಭವಾದ ಈ ಸಂಗೀತ ಸಂಸ್ಥೆ ನಂತರದ ದಿನಗಳಲ್ಲಿ ಸಂಗೀತ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿದ ಸಂಗೀತಗಾರರಿಗೆ `ಸಂಗೀತ ಸಿರಿ' ಪ್ರಶಸ್ತಿ ನೀಡುವ ಪರಿಪಾಠ ಆರಂಭಿಸಿತು. ಎಲೆ ಮರೆಯ ಕಾಯಿಯಂತೆ ಪ್ರಚಾರ- ಪ್ರಭಾವಗಳಿಂದ ದೂರ ಉಳಿದ ಕಲಾವಿದರಿಗೇ ಈ ವೇದಿಕೆಯಲಿ ಮನ್ನಣೆ. ಹುಮನಾಬಾದ್‌ನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸಂಗೀತ ಶಿಕ್ಷಕರಾಗ