ಶ್ರೀದೇವಿ ಪುರಾಣದ ಕರ್ತೃ ಚಿದಾನಂದ ಅವಧೂತರ ಉಪಾಸನಾ ದೈವ ’ಅಂಬಾ’ಮಾತೆಯ ವಿಗ್ರಹಕ್ಕೆ ಯಾದಗಿರಿ ಜಿಲ್ಲೆಯ ಸುರಪುರ ಪಟ್ಟಣದ ಗಡ್ಡದ ಅವರ ಮನೆಯಲ್ಲಿ ನಿತ್ಯಪೂಜೆ ನಡೆಯುತ್ತಿದೆ. ನವರಾತ್ರಿಯ ಈ ದಿನಗಳಲ್ಲಿ ಅಲ್ಲಿ ವಿಶೇಷ ಪೂಜೆ- ಅರ್ಚನೆಗಳು ಶ್ರದ್ಧೆ- ಭಕ್ತಿಯಿಂದ ನಡೆಯುತ್ತಿವೆ. ಸುರಪುರ ಪಟ್ಟಣದ ಮುಜಂದಾರ ಗಲ್ಲಿಯ ಪಾಂಡುರಂಗ ದೇವಸ್ಥಾನದ ಹಿಂಬದಿಯಲ್ಲಿ ಇರುವ ವೆಂಕಣ್ಣಭಟ್ ಗಡ್ಡದ ಅವರ ಮನೆಯಲ್ಲಿ ಚಿದಾನಂದ ಅವಧೂತರು ಪೂಜಿಸುತ್ತಿದ್ದ ಉಪಾಸನಾ ಮೂರ್ತಿ ಇದೆ. ನಿತ್ಯಪೂಜೆ ಸಲ್ಲುವ ಶ್ರೀಚಕ್ರ ಸಮೇತ ಇರುವ ದೇವಿಯ ಪ್ರತಿಮೆಯು ಸುಮಾರು ೧೨ ಇಂಚು ಎತ್ತರದ್ದಾಗಿದೆ. ಪಾಶ ಅಂಕುಶ, ಬಿಲ್ಲುಬಾಣಗಳನ್ನು ಕೈಯಲ್ಲಿ ಹಿಡಿದಿರುವ ಚತುರ್ಭುಜೆ ದೇವಿಯ ಪ್ರತಿಮೆಗೆ ಕೇವಲ ಧಾರ್ಮಿಕ ಕಾರಣಗಳಿಗಾಗಿ ಮುಖ್ಯ ಅಲ್ಲ. ಇದೊಂದು ಐತಿಹಾಸಿಕ, ಸಾಂಸ್ಕೃತಿಕ ಮಹತ್ವ ಇರುವಂತಹದ್ದು. ಆಸ್ಥೆ ಮತ್ತು ಶ್ರದ್ಧೆಯ ಕಾರಣಗಳಿಂದ ಮೂರ್ತಿಯನ್ನು ಸಮೀಪದಿಂದ ನೋಡಲು ಸಾಧ್ಯವಿಲ್ಲದಿದ್ದರೂ ಪೂಜಾಲಂಕೃತ ವಿಗ್ರಹವನ್ನು ನೋಡುವುದೇ ಒಂದು ಸೊಬಗು. ಚಿದಾನಂದ ಅವಧೂತರೇ ಸ್ವತಃ ಪೂಜಿಸುತ್ತಿದ್ದ ಈ ವಿಗ್ರಹ ಅವರ ಕಾಲಾನಂತರ ಗಡ್ಡದ ಮನೆ ಸೇರಿಕೊಂಡಿತು. ಸದ್ಯ ಸುರಪುರ ನಿವಾಸಿಗಳಾಗಿರುವ ಕನಕಗಿರಿ ಮೂಲದ ಗಡ್ಡದ ಮನೆತನದ ಹಿರಿಯರಿಗೆ ಈ ಪ್ರತಿಮೆಯನ್ನು ಸ್ವತಃ ಅವಧೂತರೇ ತಮ್ಮ ಕೊನೆಯ ದಿನಗಳಲ್ಲಿ ನಿತ್ಯಪೂಜೆ ನಡೆಸುವಂತೆ ಸೂಚಿಸಿ ಹಸ್ತಾಂತರ ಮಾಡಿದರು ಎಂಬ ಐತಿಹ್ಯ ಇದೆ. ವೆಂಕಣ್ಣಭಟ್ಟರು ಈ ಐ...
ಬಸವೇಶ್ವರ ಮತ್ತು ಅವನ ಕಾಲ ಡಾ . ಪಿ . ಬಿ . ದೇಸಾಯಿ ಕನ್ನಡಕ್ಕೆ : ಪ್ರೊ . ಸದಾನಂದ ಕನವಳ್ಳಿ ಪರಿಷ್ಕರಣೆ : ಡಾ . ಸಿದ್ಧಲಿಂಗ ಪಟ್ಟಣಶೆಟ್ಟಿ ಪ್ರಕಾಶಕರು : ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠ ಗದಗ . ‘ ನೋಯುವ ಹಲ್ಲಿನ ಕಡೆಗೇ ನಾಲಿಗೆ ಹೊರಳುತ್ತದೆ ’ ಎಂದು ಹೆಸರಾಂತ ನಾಟಕಕಾರ ಗಿರೀಶ್ ಕಾರ್ನಾಡರು ತಮ್ಮ ‘ ತಲೆದಂಡ ’ ಕಕ್ಕಾಗಿ ಬರೆದ ಮಾತುಗಳಲ್ಲಿ ದಾಖಲಿಸಿದ್ದಾರೆ . 12 ನೇ ಶತಮಾನವು ಕರ್ನಾಟಕದ ಸಾಮಾಜಿಕ , ಧಾರ್ಮಿಕ , ಸಾಂಸ್ಕೃತಿಕ , ಸಾಹಿತ್ಯಿಕ ಭಿತ್ತಿಯ ಮೇಲೆ ಬೀರಿದ ಪ್ರಭಾವ ಮತ್ತು ಅದು ಉಂಟು ಮಾಡಿದ ಪರಿಣಾಮಗಳೆರಡೂ ಅನನ್ಯ . ‘ ಬಸವಯುಗ ’ ಎಂದು ಕರೆಯಬಹುದಾದ ಕಾಲಘಟ್ಟ ಅದು . ಈ ಬಗ್ಗೆ ಸಾವಿರಾರು ಪುಟಗಳಷ್ಟು ಬರವಣಿಗೆ - ಸಾಹಿತ್ಯ ಪ್ರಕಟವಾಗಿದೆ . ಪ್ರಕಟವಾಗುತ್ತಲೇ ಇದೆ . ಹನ್ನೆರಡನೇ ಶತಮಾನದ ಚಳವಳಿಯು ನಾಟಕ - ಕಾದಂಬರಿ ಸೇರಿದಂತೆ ಸೃಜನಶೀಲ ಬರವಣಿಗೆಗಳಲ್ಲಿ ದಾಖಲಾಗಿದೆ . ಲಂಕೇಶ್ ಅವರ ‘ ಸಂಕ್ರಾಂತಿ ’ (1971), ಎಚ್ . ಎಸ್ . ಶಿವಪ್ರಕಾಶ್ ಅವರ ‘ ಮಹಾಚೈತ್ರ ’ (1986), ಗಿರೀಶ್ ಕಾರ್ನಾಡರ ‘ ತಲೆದಂಡ ’ (1991) ಮತ್ತು ಚಂದ್ರಶೇಖರ ಕಂಬಾರರ ‘ ಶಿವರಾತ್ರಿ ’ (2011), ಇತ್ತೀಚಿಗೆ ಪ್ರದರ್ಶನ ಕಂಡ ನಟರಾಜ ಹುಳಿಯಾರ್ ಅವರ ‘ ಮುಂದಣ ಕಥನ ’ (2017) ಗಳು ಬಸವಯುಗದ ಕುರಿತ ರಂಗದ ಮೇಲೆ ನಡೆದ ಸೃಜನಶೀಲ ಪ್ರಯೋಗಗಳು . ಅಷ್ಟು ಮಾತ್ರವಲ್ಲದೆ ಸಾಹಿತ್ಯ ಮತ್ತು ರಂಗಭೂಮಿಯು ತೋರಿದ ಸಾಂಸ್ಕೃತಿ...
ಡಾ. ರಹಮತ್ ತರೀಕೆರೆ ಅವರ ‘ಕತ್ತಿ ಅಂಚಿನ ದಾರಿ’ ಕನ್ನಡದ ಮಹತ್ವದ ಪುಸ್ತಕಗಳಲ್ಲಿ ಒಂದು. ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಗೆ ಭಾಜನ ಆಗಿರುವ ಈ ಪುಸ್ತಕ ‘ಮಹತ್ವದ ಕೃತಿ’ ಎಂಬುದು ಸಾಬೀತಾಗಿದೆ. ಆದರೆ, ಪುಸ್ತಕವೊಂದರ ಮಹತ್ವ ನಿರ್ಧಾರ ಆಗುವುದು ಅದಕ್ಕೆ ಸಿಗುವ ಮನ್ನಣೆ, ಗೌರವಗಳ ಮೂಲಕ ಅಲ್ಲ. ಹಾಗೆ ಆಗಬಾರದು ಕೂಡ. ಮಹತ್ವ ನಿರ್ಧರಿಸುವುದಕ್ಕೆ ಇರುವ ಹಲವು ಮನದಂಡಗಳ ಪೈಕಿ ಪ್ರಶಸ್ತಿಯೂ ಒಂದು ಎಂಬುದರಲ್ಲಿ ಎರಡು ಮತಿಲ್ಲ. ‘ಕತ್ತಿಯಂಚಿನ ದಾರಿ’ ಪುಸ್ತಕವು ಕೇವಲ ಪ್ರಶಸ್ತಿ ಪಡೆದ ಕಾರಣದಿಂದಾಗಿ ಮಹತ್ವ ಪಡೆದ ಕೃತಿ ಅಲ್ಲ ಎಂಬುದು ಅರಿವಿಗೆ ಬರುವುದಕ್ಕೆ ಹೆಚ್ಚು ಹೊತ್ತು ಹಿಡಿಯುವುದಿಲ್ಲ. ಕತ್ತಿಯಂಚಿನ ದಾರಿಯಲ್ಲಿ ಒಟ್ಟು ೨೦ ಲೇಖನಗಳಿವೆ. ೨೫೮ ಪುಟಗಳ ಈ ಪುಸ್ತಕವು ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ. ವೈಚಾರಿಕತೆಯ ಭಾರ ಇಲ್ಲದ ಇಲ್ಲಿನ ಚಿಂತನೆಗಳು ಸರಳ ಮತ್ತು ನೇರವಾಗಿ ಇರುವುದರಿಂದ ಪ್ರಿಯವಾಗುತ್ತವೆ. ಅಪ್ಪಟ ಸಾಹಿತ್ಯ ವಿಮರ್ಶೆಯ ಗ್ರಂಥವಾದರೂ ಅದರಾಚೆಗೆ ಬೆಳೆದು ನಿಲ್ಲುತ್ತದೆ. ಸಾಹಿತ್ಯದ ಮೀಮಂಸೆ ಕಟ್ಟಿಕೊಡುವುದರ ಜೊತೆಗೆ ಸಂಸ್ಕೃತಿ ಕುರಿತ ಹರಳುಗಟ್ಟಿದ ಚಿಂತನೆಗಳನ್ನು ಮಂಡಿಸುತ್ತದೆ. ಕೇವಲ ಸಾಹಿತ್ಯ ಮತ್ತು ಸಂಸ್ಕೃತಿಗೆ ಮತ್ರ ಸೀಮಿತವಾಗದೆ ಒಟ್ಟು ಬದುಕಿನ ಗ್ರಹಿಕೆಯನ್ನು ಶ್ರೀಮಂತಗೊಳಿಸುತ್ತವೆ. ೨೦ ಲೇಖನಗಳ ಪೈಕಿ ‘ಕುವೆಂಪು ಚಿಂತನೆ; ಆಕರ್ಷಣೆ ವಿಕರ್ಷಣೆ’ ಮತ್ತು ‘ಕುವೆಂಪು: ವೈರುಧ್ಯಗಳ ಹಾದಿಯ ಪಯಣಿಗನ...
ಕಾಮೆಂಟ್ಗಳು