ಕರ್ನಾಟಕದ ಏಕೀಕರಣ: ಒಂದು ಹಿನ್ನೋಟ
ಕನ್ನಡ ಮಾತನಾಡುವ ಪ್ರದೇಶಗಳು ಒಂದೇ ಆಡಳಿತ ವ್ಯಾಪ್ತಿಗೆ ಸೇರುವುದಕ್ಕಾಗಿ ಹೋರಾಟವೂ ಸೇರಿದಂತೆ ನಡೆದ ಸಭೆ- ಸಮಾರಂಭ ಹಾಗೂ ವಾಗ್ವಾದ, ಚರ್ಚೆ ಮುಂತಾದ ಚಟುವಟಿಕೆಗಳನ್ನು ‘ಏಕೀಕರಣ ಚಳುವಳಿ’ ಎಂದು ಕರೆಯಲಾಗುತ್ತದೆ. ಅಂದರೆ ಹಿಂದೆ ಕನ್ನಡ ಮಾತನಾಡುವ ಜನ ಒಂದೇ ಆಡಳಿತಕ್ಕೆ ಒಳಪಟ್ಟಿರಲಿಲ್ಲವೇ? ಎಂಬ ಪ್ರಶ್ನೆ ಮೂಡುವುದು ಸಹಜ. ಹೌದು ಕನ್ನಡ ಭಾಷೆ ಮಾತನಾಡುವ ಜನ ಹತ್ತು ಹಲವು ಆಡಳಿತ ಪ್ರದೇಶಗಳಲ್ಲಿ ಹರಿದು ಹಂಚಿಹೋಗಿದ್ದರು. ಆಡಳಿತ ನಡೆಸುವುದಕ್ಕೆ ಸಂಬಂಧಿಸಿದಂತೆ ಒಂದು ಭಾಷೆಯನ್ನು ಮಾತನಾಡುವ ಜನ ಒಂದೇ ಪ್ರದೇಶದ ವ್ಯಾಪ್ತಿಗೆ ಸೇರಬೇಕು ಎಂಬ ಪರಿಕಲ್ಪನೆಯೇ ಇರಲಿಲ್ಲ. ಏಕೀಕರಣ ಚಳುವಳಿಯು ಯಾಕೆ? ಮತ್ತು ಹೇಗೆ? ಹುಟ್ಟಿಕೊಂಡಿತು. ಅದು ಬೆಳೆದು ಬಂದ ರೀತಿಯನ್ನು ಸ್ಥೂಲವಾಗಿ ಅರಿತು ಕೊಂಡರೆ ಕನ್ನಡ ಭಾಷಿಕರೂ ಸೇರಿದಂತೆ ಹಲವು ಭಾರತೀಯ ಭಾಷೆಗಳ ಪ್ರತ್ಯೇಕ ಪ್ರಾಂತ್ಯಗಳು ಅಥವಾ ರಾಜ್ಯಗಳು ರೂಪುಗೊಂಡ ಕಥೆಯು ಅರಿವಿಗೆ ಬರುತ್ತದೆ. 1947ರ ಆಗಸ್ಟ್ 15ರಂದು ಭಾರತವು ಬ್ರಿಟಿಷ್ ಆಡಳಿತದಿಂದ ಮುಕ್ತಗೊಂಡಿತು. ಸತತ ಮತ್ತು ಸುದೀರ್ಘ ಹೋರಾಟದ ಫಲವಾಗಿ ಸ್ವಾತಂತ್ರ್ಯವೇನೋ ದೊರೆಯಿತು. ಆದರೆ, ಧರ್ಮದ ಹೆಸರಿನಲ್ಲಿ ಭಾರತವು ಎರಡು ದೇಶಗಳಾಗಿ ವಿಭಜನೆಗೊಂಡಿತು. ಪಾಕಿಸ್ತಾನ- ಭಾರತಗಳೆರಡೂ ಪ್ರತ್ಯೇಕ ದೇಶಗಳಾಗಿ ಬ್ರಿಟಿಷ್ ಆಡಳಿತದಿಂದ ಸ್ವತಂತ್ರಗೊಂಡವು. ಬ್ರಿಟಿಷ್ ಆಡಳಿತ ನಡೆಯುತ್ತಿದ್ದ ಸಂದರ್ಭದಲ್ಲಿ ಭಾರತದಾದ್ಯಂತ ಏಕರೂಪಿಯಾದ ಆಡಳಿತ ವ್ಯವಸ್ಥೆ ಇರಲ
ಕಾಮೆಂಟ್ಗಳು