ಪೋಸ್ಟ್‌ಗಳು

Kannada ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಕವಿಗಳ ಕಾಣಿಕಿ- ಬೀದರ್ ಕವಿಗೋಷ್ಠಿಗಾಗಿ ಬೇಂದ್ರೆ ಬರೆದ ಕವಿತೆ

ಇಮೇಜ್
ಕವಿಗಳ ಕಾಣಿಕಿ ೧ ಸಲಾಮ್ ಮಾಡ್ತೇವಿ ಶಾಹೀರಿ ವಾಣೀಗೆ ಜಗ ಜಾಹೀರ ವಜ್ರದ ಖಾಣೀಗೆ ಕಾಳಾ ಬಝಾರ ಹಜಾರ ಇದ್ರೂ ಬಾಳೋ ಉಸಿರಿಗೆ ಒಂದೇ ಹೆಸರು: ಅದು ಕವಿ ಕವೀ ಕಾಣಿಕೀ ಅದಕ್ಕ ಬೇಕಿಲ್ಲ ಬ್ಯಾರೆ ಆನಿಕಿ ೨ ಬೀದರಕ್ಕ ಆದಾವರೆಷ್ಟೋ? ಹೋದಾವರೆಷ್ಟೋ? ಆಗದವರೂ ಇದ್ದಾರು ಹೋಗದವರೂ ಇದ್ದಾರು ಬರೋ ಅವರಿಗೆ ಬಾಗಿಲಾ ತೆರದ ಅವ ಹೋಗೋ ಅವರ ಹಾದಿ ಮುಚ್ಚಿಲ್ಲ ೩ ಪ್ರಜಾ ಇಲ್ಲದ ರಾಜಾ ಯಾವ ಖಾ ಜಾ? ಯಾವ ಭಾಷಾದಾಗ ಊದಿರಿ ಬೇಂಡಬಾಜಾ ಕನ್ನಡೀ-ಮರಾಠೀ-ತೇಲಂಗೀ ಊರ್ದೂ, ಪಾರಸೀ, ಅರಬ್ಬೀ ಹಿಂದೀ, ಹಿಂದಿನದೂ, ಇಂದಿನದೂ, ಮುಂದಿನದೂ ಸಂಸ್ಕೃತಾ, ಪ್ರಾಕೃತಾ, ಅಪಭ್ರಂಶಾ, ಪೈಶಾಚಿ  ೪ ಹೊಡೋ ಗಾಡೀ ದ್ರಾವಿಡೀ, ಶಾಬರೀ, ಪುಳಿಂದೀ, ಗೊಂಡೀ ಕರಣದಾಗ ನಾಟಿದ್ದು ನಾಟಲಿ ಉಳಿದದ್ದು ದಾಟಲೀ ಸೋಳಾ ದೇಶಾ, ಸೋಳಾ ಭಾಷಾ, ಸೋಳಾ ಅಂಗೀ ಭಾವ ಇದ್ಹಾಂಗ ಜೀವ, ಜೀವಲಿಂಗೀ ೫ ಹಳೇ ಗೊಂಡಾರಣ್ಯದ ಗಂಗಾಲಹರಿ, ಗೋದಾವರೀ ಇನ್ನೂ ಹರೀತನ ಅದ ಉತ್ತರಕ್ಕ ಬೀದರದ ಹತ್ತರ ಹತ್ತರಕ್ಕ ೬ ’ಅಹಂ ರಾಷ್ಟೀ ಸಂಗಮನೀ’ ದೇಹದಾಗ ಸ್ನೇಹ ಇರದಿದ್ದರ ಮನದ ಮೊನೀಯೊಳಗ ದೀಪ ಎಲ್ಲೀದು? ಜನದ ಜಾತಿ ನೂರಾದರೂ ಜ್ಯೋತಿ ನೂರಾ ಒಂದು ಒಂದು ಬಿಂದುವಿಗೇ ನೂರು ಸಂದು ಸಾವಿರದವರ ಲಕ್ಷ್ಯ ಜೀವ ಕೋಟಿ ಕಡಿಗೆ ಅಬ್ಜದಾಗ ರಸದ ಅಡಿಗೆ ೭ ಹಿಂದುಸ್ಥಾನ, ಪಾಕಿಸ್ಥಾನ ಒಂದಾಗಬೇಕು ’ಭಾರತ ಹಮಾರಾ’ ಮುಂದಾಗಬೇಕು ಮನಕ್ಕೊಂದು ಮತಂ ಮಾಡಿ ಜನ ಧರ್ಮ ಖತಂ ಮಾಡಬ್ಯಾಡ್ರಿ ೮ ಹೋ...

ಮುಖಾಮುಖಿ-1-siddalingayya

ಇಮೇಜ್
ಬುಕ್ ಬ್ರಹ್ಮ'ದ ಮುಖಾ-ಮುಖಿ ಸಂವಾದದಲ್ಲಿ ಪಂಪ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಸಿದ್ದಲಿಂಗಯ್ಯ ಅವರ ವಿಶೇಷ ಸಂದರ್ಶನ. 'ಬುಕ್ ಬ್ರಹ್ಮ' ಸಂಪಾದಕರಾದ ದೇವು ಪತ್ತಾರ್ ಅವರು ಕವಿಗಳೊಂದಿಗೆ ನಡೆಸಿರುವ ವಿಶೇಷ ಸಂದರ್ಶನದಲ್ಲಿ ಕಾವ್ಯ ಮತ್ತು ಕಾಲದ ಕುರಿತು ಮಾತನಾಡಿದ್ದಾರೆ. ಸಂದರ್ಶನದ ಯುಟ್ಯೂಬ್‌ ಲಿಂಕ್‌

’೧೮೫೭ರ ಸಿಪಾಯಿದಂಗೆ’ ಮತ್ತು ’ಭಾಲ್ಕಿ ಪಿತೂರಿ

ಇಮೇಜ್
ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು ಸರಿಯಾಗಿ ೬೧ ವರ್ಷಗಳು ಪೂರ್ಣಗೊಂಡಿವೆ. ಸ್ವಾತಂತ್ರ್ಯ ಪಡೆಯುವುದಕ್ಕಾಗಿ ಹೋರಾಟ ಆರಂಭವಾಗಿ ೧೫೧ ವರ್ಷಗಳಾಗಿವೆ. ಸತತ ೯೦ ವರ್ಷಗಳ ಕಾಲ ನಡೆದ ಹೋರಾಟದಲ್ಲಿ ಭಾಗಿಯಾದ ಬಹುತೇಕರು `ಕಾಲ'ನ ಮನೆ ಸೇರಿದ್ದಾರೆ. ಹೊರಾಟ ಮತ್ತು ಅದರ ನೆನಪುಗಳು ಇತಿಹಾಸದ ಪುಟ ಸೇರಿವೆ. ಹಲವು ಪ್ರಸಂಗ- ಘಟನೆಗಳು ಪುಸ್ತಕದ ಪುಟಗಳಲ್ಲಿ ಮರೆತು ಹೋಗಿವೆ. ಮರೆತು ಹೋದ, ಆದರೆ , ಮರೆಯಬಾರದ ಒಂದು ಘಟನೆಯ ವಿವರ ಇಲ್ಲಿದೆ- **** ೧೮೫೭ರ ಮೊದಲ ಸ್ವಾತಂತ್ರ್ಯ ಸಂಗ್ರಾಮಕ್ಕೂ ಬೀದರ್ ಜಿಲ್ಲೆಯ ಭಾಲ್ಕಿಗೂ ಏನು ಸಂಬಂಧ? ವಿದೇಶಿ ವಿದ್ವಾಂಸರು `ಸಿಪಾಯಿ ದಂಗೆ' ಗುರುತಿಸುವ `ಮೊದಲ ಸ್ವಾತಂತ್ರ್ಯ ಸಂಗ್ರಾಮ' ಆರಂಭವಾದದ್ದು ಸರಿಯಾಗಿ ೧೫೧ ವರ್ಷಗಳ ಹಿಂದೆ. ಸತತ ಹತ್ತು ವರ್ಷಗಳ ಕಾಲ ದೇಶದ ವಿವಿಧ ಕಡೆಗಳಲ್ಲಿ ನಡೆದ ದಂಗೆ- ಪಿತೂರಿಗಳು ಕಂಪೆನಿ ಸರ್ಕಾರವನ್ನು ಕಂಗೆಡಿಸ್ದಿದವು. ಸರಿಯಾಗಿ ಹತ್ತು ವರ್ಷಗಳ ನಂತರ `ಭಾಲ್ಕಿ ಪಿತೂರಿ'ಯನ್ನು ವಿಫಲಗೊಳಿಸುವ ಮೂಲಕ ಬ್ರಿಟಿಷರು ಮೊದಲ ಹೋರಾಟವನ್ನು ಸಂಪೂರ್ಣವಾಗಿ ಕೊನೆಗೊಳಿಸುವಲ್ಲಿ ಯಶಸ್ವಿಯಾದರು. ಆ ಕಥೆಯ ಕೆಲವು ಐತಿಹಾಸಿಕ ವಿವರಗಳು ಇಲ್ಲಿವೆ- ೧೮೫೭ಮೇ ೧೦ರಂದು ಮೀರತ್‌ನಲ್ಲಿ ಮತ್ತು ಅಂಬಾಲಾಗಳ ಬ್ರಿಟಿಷ್ ಸೇನಾ ಪಡೆಯಲ್ಲಿ ಆರಂಭವಾದ ದಂಗೆಯು ರಾಷ್ಟ್ರದ ಹಲವೆಡೆಗಳಲ್ಲಿ ಪಸರಿಸಿತು. ಭಾರತೀಯರು ನಡೆಸಿದ ೧೮೫೭ರ ಹೋರಾಟದ ತಕ್ಷಣದ ಕಾರಣ ಬಂದೂಕಿನ ತೋಟಾಗಳಿಗೆ `ಹಂದಿ ಮತ್ತು ಗೋವಿನ ಕ...

ಅಂಬಿಕಾತನಯದತ್ತ ಅಲ್ಲ; ಪತ್ರಕರ್ತ ಬೇಂದ್ರೆ

ಇಮೇಜ್
ಪಟ್ಟ ಪಾಡನ್ನೇ ಹಾಡಾಗಿಸಿ ' ಕಾವ್ಯೋದ್ಯೋಗ ' ಮಾಡಿದ ವರಕವಿ ದ . ರಾ . ಬೇಂದ್ರೆ ತುತ್ತಿನಚೀಲ ತುಂಬಿಸಿಕೊಳ್ಳುವುದಕ್ಕಾಗಿ - ಹವ್ಯಾಸಕ್ಕಾಗಿ ಪತ್ರಿಕೆಗಳನ್ನು ಆರಂಭಿಸಿ - ಸಂಪಾದಕರಾಗಿ ಪತ್ರಕರ್ತರಾಗಿ ಕೆಲಸ ಮಾಡಬೇಕಾಯಿತು . ಚಲನಶೀಲ ಪ್ರತಿಭೆ ತನ್ನತನ ಕಂಡುಕೊಳ್ಳಲು ಹಲವಾರು ಸಾಧ್ಯತೆಗಳನ್ನು ಪ್ರಯತ್ನಿಸುತ್ತಿರುತ್ತದೆ . ನೆಲೆ ಸಿಕ್ಕ ತಕ್ಷಣ ಅಲ್ಲಿ ತಳ ಊರುತ್ತದೆ . ಆದರೆ , ಬೇಂದ್ರೆಯವರು ಕಾವ್ಯಲೋಕದಲ್ಲಿ ಗತಿ ಸಿಕ್ಕ ಮೇಲೂ ` ಹೊಟ್ಟೆಪಾಡಿಗಾಗಿ ' ಸಾಹಿತ್ಯ ಪತ್ರಿಕೋದ್ಯಮವನ್ನು ಅವಲಂಬಿಸಿದ್ದರು ಎಂಬುದು ಕುತೂಹಲ ಹುಟ್ಟಿಸುವ ಸಂಗತಿ . ಕೈಬರಹದ ಪತ್ರಿಕೆಗಳಾದ ' ಕೊಳಲು ', ' ಗೆಳೆಯ ', ` ನಸುಕು ' ಮತ್ತು ಮುದ್ರಣ ಕಂಡ ' ಸ್ವಧರ್ಮ ' ವನ್ನು ಕಾವ್ಯಾಸಕ್ತಿ ಮತ್ತು ಹವ್ಯಾಸಕ್ಕಾಗಿ ಆರಂಭಿಸಿದ್ದ ಬೇಂದ್ರೆಯವರು ಮಾಸ್ತಿಯವರ ಸಹಾಯದಿಂದ ` ಜೀವನ ' ಮಾಸಪತ್ರಿಕೆಯನ್ನು ಸಂಪಾದಿಸಿ ಪ್ರಕಟಿಸಿದ್ದರು. '1940 ರ ವರೆಗೆ ಎಲ್ಲೂ ಕೆಲಸ ಸಿಕ್ಕದೆ ಅಣ್ಣ ಮಾಸ್ತಿಯವರ ವಾತ್ಸಲ್ಯದ ಬೆಂಬಲದಿಂದ ಜೀವನ ಸಂಪಾದಕನೆಂದು ಗೌರವದಿಂದ ಅಲೆದಾಡಿದೆ '' ಎಂದು ತಮ್ಮ ಆತ್ಮಕತೆ ` ಕಾವ್ಯೋದ್ಯೋಗ ' ದಲ್ಲಿ ಬೇಂದ್ರೆ ಬರೆದಿದ್ದಾರೆ. ಪತ್ರಿಕೆಗಳನ್ನು ನಡೆಸಿದ ಅವಧಿಯಲ್ಲಿ ಬೇಂದ್ರೆಯವರು ವೈವಿಧ್ಯಮ...