ಪೋಸ್ಟ್‌ಗಳು

Poet ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಮುಖಾಮುಖಿ-1-siddalingayya

ಇಮೇಜ್
ಬುಕ್ ಬ್ರಹ್ಮ'ದ ಮುಖಾ-ಮುಖಿ ಸಂವಾದದಲ್ಲಿ ಪಂಪ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಸಿದ್ದಲಿಂಗಯ್ಯ ಅವರ ವಿಶೇಷ ಸಂದರ್ಶನ. 'ಬುಕ್ ಬ್ರಹ್ಮ' ಸಂಪಾದಕರಾದ ದೇವು ಪತ್ತಾರ್ ಅವರು ಕವಿಗಳೊಂದಿಗೆ ನಡೆಸಿರುವ ವಿಶೇಷ ಸಂದರ್ಶನದಲ್ಲಿ ಕಾವ್ಯ ಮತ್ತು ಕಾಲದ ಕುರಿತು ಮಾತನಾಡಿದ್ದಾರೆ. ಸಂದರ್ಶನದ ಯುಟ್ಯೂಬ್‌ ಲಿಂಕ್‌

ಅಂಬಿಕಾತನಯದತ್ತ ಅಲ್ಲ; ಪತ್ರಕರ್ತ ಬೇಂದ್ರೆ

ಇಮೇಜ್
ಪಟ್ಟ ಪಾಡನ್ನೇ ಹಾಡಾಗಿಸಿ ' ಕಾವ್ಯೋದ್ಯೋಗ ' ಮಾಡಿದ ವರಕವಿ ದ . ರಾ . ಬೇಂದ್ರೆ ತುತ್ತಿನಚೀಲ ತುಂಬಿಸಿಕೊಳ್ಳುವುದಕ್ಕಾಗಿ - ಹವ್ಯಾಸಕ್ಕಾಗಿ ಪತ್ರಿಕೆಗಳನ್ನು ಆರಂಭಿಸಿ - ಸಂಪಾದಕರಾಗಿ ಪತ್ರಕರ್ತರಾಗಿ ಕೆಲಸ ಮಾಡಬೇಕಾಯಿತು . ಚಲನಶೀಲ ಪ್ರತಿಭೆ ತನ್ನತನ ಕಂಡುಕೊಳ್ಳಲು ಹಲವಾರು ಸಾಧ್ಯತೆಗಳನ್ನು ಪ್ರಯತ್ನಿಸುತ್ತಿರುತ್ತದೆ . ನೆಲೆ ಸಿಕ್ಕ ತಕ್ಷಣ ಅಲ್ಲಿ ತಳ ಊರುತ್ತದೆ . ಆದರೆ , ಬೇಂದ್ರೆಯವರು ಕಾವ್ಯಲೋಕದಲ್ಲಿ ಗತಿ ಸಿಕ್ಕ ಮೇಲೂ ` ಹೊಟ್ಟೆಪಾಡಿಗಾಗಿ ' ಸಾಹಿತ್ಯ ಪತ್ರಿಕೋದ್ಯಮವನ್ನು ಅವಲಂಬಿಸಿದ್ದರು ಎಂಬುದು ಕುತೂಹಲ ಹುಟ್ಟಿಸುವ ಸಂಗತಿ . ಕೈಬರಹದ ಪತ್ರಿಕೆಗಳಾದ ' ಕೊಳಲು ', ' ಗೆಳೆಯ ', ` ನಸುಕು ' ಮತ್ತು ಮುದ್ರಣ ಕಂಡ ' ಸ್ವಧರ್ಮ ' ವನ್ನು ಕಾವ್ಯಾಸಕ್ತಿ ಮತ್ತು ಹವ್ಯಾಸಕ್ಕಾಗಿ ಆರಂಭಿಸಿದ್ದ ಬೇಂದ್ರೆಯವರು ಮಾಸ್ತಿಯವರ ಸಹಾಯದಿಂದ ` ಜೀವನ ' ಮಾಸಪತ್ರಿಕೆಯನ್ನು ಸಂಪಾದಿಸಿ ಪ್ರಕಟಿಸಿದ್ದರು. '1940 ರ ವರೆಗೆ ಎಲ್ಲೂ ಕೆಲಸ ಸಿಕ್ಕದೆ ಅಣ್ಣ ಮಾಸ್ತಿಯವರ ವಾತ್ಸಲ್ಯದ ಬೆಂಬಲದಿಂದ ಜೀವನ ಸಂಪಾದಕನೆಂದು ಗೌರವದಿಂದ ಅಲೆದಾಡಿದೆ '' ಎಂದು ತಮ್ಮ ಆತ್ಮಕತೆ ` ಕಾವ್ಯೋದ್ಯೋಗ ' ದಲ್ಲಿ ಬೇಂದ್ರೆ ಬರೆದಿದ್ದಾರೆ. ಪತ್ರಿಕೆಗಳನ್ನು ನಡೆಸಿದ ಅವಧಿಯಲ್ಲಿ ಬೇಂದ್ರೆಯವರು ವೈವಿಧ್ಯಮ...